ಹನಿಮಳೆಯಲ್ಲಿ ತೊಯ್ದ ಮಾವಿನ ಚಿಗುರು
ಹೊಚ್ಚ ಹೊಸ ಟಾರು ರಸ್ತೆಯ ವೈಯ್ಯಾರ
ಕಡು ಬಿಸಿಲಿನಲಿ ಸಿಕ್ಕ ಬಣ್ಣದ ಬೀಸಣಿಕೆ
ಮೊದಲಬಾರಿ ಸೀರೆಯುಟ್ಟು ನಿಂತ ಚಿಕ್ಕ ತಂಗಿ
ಗಾಳಿಯಲ್ಲಿ ತೇಲಿ ಭುಜದ ಮೇಲೆ ಬಿದ್ದ ಹಣ್ಣೆಲೆ
ಅಂದೆಂದೋ ನಸುನಗೆ ಬೀರಿದ ಯಾರದೋ ಮಗು
ಸಂಜೆ ಐದಕ್ಕೆ ನುಸುಳುವ ಸ್ವರ್ಣ ರಶ್ಮಿ
ಚುಮುಚುಮೆನ್ನುವ ಬೆಳಗಿನ ನೀಲಿ ಬಣ್ಣ
ಮನಸ್ಸಿನೊಳಗೆ ಮೇಘ ಮಂದಾರವನ್ನೆಬ್ಬಿಸುತ್ತವೆ
ಮುದುಡಿದ ಕನಸುಗಳಿಗೆ ಇಂಧನವಾಗಿ
ಚೈತನ್ಯವನ್ನು ಬಡಿದೆಬ್ಬಿಸುತ್ತವೆ,
ಸರಳತೆಯೇ ಜೀವನವೆನ್ನಿಸುತ್ತವೆ!
- ಪ್ರಸನ್ನ ರೇವಣ್ಣ
No comments:
Post a Comment