Tuesday, August 22, 2006

ಆರೈಕೆಗಳಿಲ್ಲದಿದ್ದರೂ...

ಆರೈಕೆಗಳಿಲ್ಲದಿದ್ದರೂ ತುಳಿಸಿಕೊಂಡೂ
ಬಿರಬಿರನೆ ಬೆಳೆದು ನಿಂತು, ಕಂಪ ಸೂಸಿ
ಬೇಸಗೆಗೆ ಬಾಡಿ, ಮಳೆಗಾಲದಲ್ಲಿ ಬೊಮಿಯಪ್ಪಿ,
ಶತಮಾನಗಳಿಂದಲೂ ಮಹಾತ್ಮ, ಮೊರ್ಖರೆನ್ನದೆ
ಎಲ್ಲರ ಹಾದಿಗಳನ್ನಲಂಕರಿಸಿ, ಜಗವಾಳಿದ ಧಣಿಗಳ
ಕೋಟೆ ಕೊತ್ತಲಗಳನೇರಿ ಬೆಳೆದು, ತನ್ನ ಪಚ್ಚೆ
ಜೀವವನ್ನು ಸದ್ದಿಲ್ಲದೆ ಎಲ್ಲೆಡೆಗೆ ಹರಡಿ,
ಕೈಲಾಸದ ಶಿವನಿಂದ ಕೊಟ್ಟಿಗೆಯ ದನದವರೆಗೆ
ಎಲ್ಲರಿಗೂ ಆಪ್ಯಾಯಮಾನವಾದರೂ
ತಿರಸ್ಕೃತವಾದರೂ ತಾನು ತಾನಾಗಿಯೇ ನಿಂತ
ಪರಮ ಯೋಗಿಯೇ ಹುಲ್ಲು ಗರಿಕೆ!

- ಪ್ರಸನ್ನ ರೇವಣ್ಣ

No comments: