ಯೂಸ್ಲೆಸ್ ಕವಿತೆ
ಬೆಟ್ಟದಲ್ಲಿ ಕಳೆದು ಹೋದ
ಕೆಂಪು ಹೂವ ಘಮಲು
ಕೈಜಾರಿ ಠಳ್ಳನೆ ಬಿದ್ದ
ಕಡುವೈನಿನ ಚಿತ್ತಾರದ ಅಮಲು
ಚಂದ್ರ ಕಳೆದ ಬತ್ತಲೆ ರಾತ್ರಿ
ಸುರಿಸಿದ ಉಲ್ಕೆಗಳ ಬಣ್ಣ ಸಾವಿರ
ತಂಗಾಳಿಗೆ ಮೈಯ್ಯೊಡ್ಡಿದ
ಕಂಗಳ ಹಸಿವಿನ ಕಾತರ
ಸಾಯುತ್ತಲೇ ಉರಿಯುತ್ತಿದೆ
ತಿಳಿಹಳದಿಯ ಮುಂಬತ್ತಿ
ಕುಣಿ ಕುಣಿಯುತ್ತಿದೆ
ಹೂದಾನಿಯ ನೆರಳು ಕೈಯ್ಯೆತ್ತಿ
ಕತ್ತಲ ದಿಟ್ಟಿಸುತ್ತಲೆ ಕಾಣುವ
ಕನಸುಗಳಲ್ಲೆಷ್ಟು ವ್ಯರ್ಥ?
ಪರದೆಯ ಮೇಲೆ ಮೂಡಿ ಮಡಿಯುವ
ಈ ನುಡಿಗಳಿಗಿದೆಯೆ ಅರ್ಥ?
ಪ್ರಸನ್ನ
No comments:
Post a Comment