ನಿನ್ನೆ ಮುಂಜಾವಿನ ಜಡಿಮಳೆಯಲ್ಲಿ
ಮರದ ಕೆಳಗೆ ಏಕಾಂಗಿಯಾಗಿ ನಿಂತಾಗ
ಎದೆ ತುಂಬ ನೆನಪುಗಳ ಹೂಮಳೆ
ಗರಿಕೆಯಲಗಿನ ತುದಿಯ ಹನಿಗಳು,
ಚಿಕ್ಕ ತಗ್ಗುಗಳಲ್ಲಿ ಪುಟಿದೇಳುವ ಹನಿಗಳು,
ಮರದ ಕೊಂಬೆ, ಎಲೆಗಳಿಂದ ಜಾರಿ
ಕೆನ್ನೆ ಮೇಲೆ ಬೀಳುವ ಹನಿಗಳು,
ಎಲ್ಲ ನಿನ್ನ ನಗುವಾಗಿ ಮಿನುಗುತ್ತವೆ!
ಮೈಲುಗಳೆತ್ತರದಿಂದ ನನಗಾಗಿ ಬಿದ್ದ ಹನಿಗಳು,
ನೂರಾರು ಮೈಲಿ ದೂರದಿಂದ ನಿನ್ನನ್ನು
ಸವರಿಕೊಂಡು ನನ್ನ ಹೃದಯ ಸೇರಿದ ತಂಗಾಳಿ,
ನಾವು ಯಾವಾಗಲೂ ಕೈ ಜೋಡಿಸಿ
ನೆಡೆಯುತ್ತಿದ್ದ ಬಳುಕು ರಸ್ತೆಯ ಬೇಲಿಯ ಹೂಗಳು ,
ಮನಸಿನಲ್ಲಿ ಸುಳಿಯುವ ಅಚ್ಚ ಹರೆಯದ ನೆನಪುಗಳು,
ಕಪ್ಪು ಮೋಡಗಳ ಹಿಂದಿನ ಮೇಘಾಗ್ನಿಯಂತೆ,
ಕಾಣದಿದ್ದರೂ ಕೇಳಿಸುತ್ತವೆ!
ಅನಿರೀಕ್ಷಿತವಾಗಿ ಎದೆ ಝಲ್ಲೆನಿಸುತ್ತವೆ!!
-ಪ್ರಸನ್ನ ರೇವಣ್
Tuesday, September 18, 2007
Monday, August 27, 2007
ಝುಳು ಝುಳೆನ್ನುವ ಸರದ ಸಾಲಿನ...
ಝುಳು ಝುಳೆನ್ನುವ ತೊರೆಯ ಸಾಲಿನ
ಕೇದಿಗೆ ಕಂಟಿಗಳ ನಡುವೆ
ಹರೆಯದ ಹೆಣ್ಣಿನಂತೆ ಹೋಯ್ದಾಡುತ್ತ
ಬರುತ್ತಿರುವ ಮಂದಾನಿಲದ ಕಂಪಿನ್ನೆಲ್ಲಿ?
ಸಾವಿರ ಕರಿಯಾನೆಗಳ ರಾಶಿಯಂಥ
ಥಣ್ಣನೆಯ ಬೆಟ್ಟಗಳ ಬೆನ್ನೇರಿ ಬಂದ
ಮೋಡಗಳಿಗೆ ಸಡ್ಡು ಹೊಡೆದು
ಇಬ್ಬನಿಯ ತಬ್ಬಿದ್ದ ಗರಿಕೆಯಲ್ಲಿ?
ಹಾದಿಯ ಬದಿಯಲ್ಲಿ ರತ್ನಜಾಲಿಯ
ಸಿಂಹಾಸನದಲ್ಲಿ ಕುಳಿತು ಸಪ್ತ ರಾಗಗಳ
ಸಾವಿರ ವರ್ಣಗಳನ್ನು ಊರ್ಧ್ವ ಮುಖಿಯಾಗಿ
ಹಾಡುತ್ತಿದ್ದ ಗುಬ್ಬಳದ ಹಕ್ಕಿಗಳೆಲ್ಲಿ?
ಊದುತ್ತಿದ್ದ ವಾಯುದೇವನನ್ನು
ತನ್ನ ವಿಶಾಲ ಬಾಹುಗಳಿಂದ ನಿಲ್ಲಿಸಿ
ಮೈಯೆಲ್ಲ ಕೊಳಲಾಗಿ ಮರ್ಮರ
ನಾದದಲೆಗಳಿಂದ ತೂಗುತ್ತಿದ್ದ
ಹೆಮ್ಮರ ಸಂಕುಲವೆಲ್ಲಿ?
ಎಲ್ಲಿ ಹುಡುಕಲಿ ಅಚ್ಚರಿಯ ಮೋಡಗಳ
ಮಧ್ಯೆ ನಿಚ್ಚಳದ ಬೆಳಕ?
ಎಲ್ಲಿ ಹುಡುಕಲಿ ನಿರಾಳ ಮೌನದಿ
ಬಂದ ನಿಶ್ಚಯದ ದ್ವನಿಯ?
ಎಲ್ಲಿ ಬೀಸಿದೆ ನಿಸರ್ಗದ ಬೀಸಣಿಕೆ
ನಿರ್ಮಲವಾಗಿ?
- ಪ್ರಸನ್ನ ರೇವಣ್ಣ
ಕೇದಿಗೆ ಕಂಟಿಗಳ ನಡುವೆ
ಹರೆಯದ ಹೆಣ್ಣಿನಂತೆ ಹೋಯ್ದಾಡುತ್ತ
ಬರುತ್ತಿರುವ ಮಂದಾನಿಲದ ಕಂಪಿನ್ನೆಲ್ಲಿ?
ಸಾವಿರ ಕರಿಯಾನೆಗಳ ರಾಶಿಯಂಥ
ಥಣ್ಣನೆಯ ಬೆಟ್ಟಗಳ ಬೆನ್ನೇರಿ ಬಂದ
ಮೋಡಗಳಿಗೆ ಸಡ್ಡು ಹೊಡೆದು
ಇಬ್ಬನಿಯ ತಬ್ಬಿದ್ದ ಗರಿಕೆಯಲ್ಲಿ?
ಹಾದಿಯ ಬದಿಯಲ್ಲಿ ರತ್ನಜಾಲಿಯ
ಸಿಂಹಾಸನದಲ್ಲಿ ಕುಳಿತು ಸಪ್ತ ರಾಗಗಳ
ಸಾವಿರ ವರ್ಣಗಳನ್ನು ಊರ್ಧ್ವ ಮುಖಿಯಾಗಿ
ಹಾಡುತ್ತಿದ್ದ ಗುಬ್ಬಳದ ಹಕ್ಕಿಗಳೆಲ್ಲಿ?
ಊದುತ್ತಿದ್ದ ವಾಯುದೇವನನ್ನು
ತನ್ನ ವಿಶಾಲ ಬಾಹುಗಳಿಂದ ನಿಲ್ಲಿಸಿ
ಮೈಯೆಲ್ಲ ಕೊಳಲಾಗಿ ಮರ್ಮರ
ನಾದದಲೆಗಳಿಂದ ತೂಗುತ್ತಿದ್ದ
ಹೆಮ್ಮರ ಸಂಕುಲವೆಲ್ಲಿ?
ಎಲ್ಲಿ ಹುಡುಕಲಿ ಅಚ್ಚರಿಯ ಮೋಡಗಳ
ಮಧ್ಯೆ ನಿಚ್ಚಳದ ಬೆಳಕ?
ಎಲ್ಲಿ ಹುಡುಕಲಿ ನಿರಾಳ ಮೌನದಿ
ಬಂದ ನಿಶ್ಚಯದ ದ್ವನಿಯ?
ಎಲ್ಲಿ ಬೀಸಿದೆ ನಿಸರ್ಗದ ಬೀಸಣಿಕೆ
ನಿರ್ಮಲವಾಗಿ?
- ಪ್ರಸನ್ನ ರೇವಣ್ಣ
Tuesday, February 20, 2007
ಋತುಗಳೂ ಬಣ್ಣ ಬದಲಿಸುತ್ತವೆ ಏಕೆ?
ಏಕೆ ಹಾಡಿದೆ ಕೋಗಿಲೆ ಮಾಮರಕೆ
ಏಕೆ ಹಾಡಿದವೆ ಮೇಘಗಳು ಅಂಬರಕೆ
ಪ್ರಿಯೇ, ಮಿಲನ ಸಮಯದಲ್ಲಿ
ಋತುಗಳೂ ಬಣ್ಣ ಬದಲಿಸುತ್ತವೆಯೇಕೆ?
ಸ್ನಿಗ್ಧ ಯಾಮಿನಿಯ ತಟದಲ್ಲಿ
ಬಣ್ಣ ಚೆಲ್ಲುತ್ತಾನೆ ದಿನಕರ
ನಿನ್ನನ್ನು ಕಂಡೊಡನೆ
ನನ್ನ ಕಣ ಕಣಗಳೂ
ಪುಲಕಗೊಳ್ಳುತ್ತವೆ ಏಕೆ?
ಮನ ಮಥಿಸುವಾಗ
ಮೊಳಗುವ ಮನದ ದನಿಗೆ
ಕುಣಿದಾಡಿದೆ ಎದೆಯ ತಾಳ!
ಕಾಲ್ಗೆಜ್ಜೆಯೂ ಸರಿಗಮ ಹಾಡಿದೆ
ಸಂಗೀತವಾದ ನಿನ್ನೊಲುಮೆ
ಸಾಂಗತ್ಯಕ್ಕೆ....
- ಪ್ರಸನ್ನ ರೇವಣ್ಣ
ಏಕೆ ಹಾಡಿದವೆ ಮೇಘಗಳು ಅಂಬರಕೆ
ಪ್ರಿಯೇ, ಮಿಲನ ಸಮಯದಲ್ಲಿ
ಋತುಗಳೂ ಬಣ್ಣ ಬದಲಿಸುತ್ತವೆಯೇಕೆ?
ಸ್ನಿಗ್ಧ ಯಾಮಿನಿಯ ತಟದಲ್ಲಿ
ಬಣ್ಣ ಚೆಲ್ಲುತ್ತಾನೆ ದಿನಕರ
ನಿನ್ನನ್ನು ಕಂಡೊಡನೆ
ನನ್ನ ಕಣ ಕಣಗಳೂ
ಪುಲಕಗೊಳ್ಳುತ್ತವೆ ಏಕೆ?
ಮನ ಮಥಿಸುವಾಗ
ಮೊಳಗುವ ಮನದ ದನಿಗೆ
ಕುಣಿದಾಡಿದೆ ಎದೆಯ ತಾಳ!
ಕಾಲ್ಗೆಜ್ಜೆಯೂ ಸರಿಗಮ ಹಾಡಿದೆ
ಸಂಗೀತವಾದ ನಿನ್ನೊಲುಮೆ
ಸಾಂಗತ್ಯಕ್ಕೆ....
- ಪ್ರಸನ್ನ ರೇವಣ್ಣ
Wednesday, February 14, 2007
ಕಿಟಕಿಯ ಹೊರಗೆ ಭೋರ್ಗರೆಯುತಿದೆ ಮಳೆ
ಕಿಟಕಿಯ ಹೊರಗೆ ಭೋರ್ಗರೆಯುತಿದೆ ಮಳೆ
ರೇಶಿಮೆಯಂಥ ಚಿಗುರುಗಳು ಮೂಡಿವೆ ಅಲ್ಲಲ್ಲಿ
ಅನಂತವಾಗಿ ಚಾಚಿದ ಬಯಲು ಮುಗಿಯುತ್ತದೆ
ತೆಳುನೇರಳೆಯ ಪರ್ವತರಂಗಗಳಲಿ...
ಕಪ್ಪು ಗೂಡಿನ ದೀಪವನು ಕುಣಿಸುತ್ತಿದೆ
ಮೇಘಗಳಂಚಿನಿಂದ ಜಾರಿ ಬಿದ್ದ ತಂಗಾಳಿ
ದೂರ ಸರಿಯುತ್ತಿದ್ದಾನೆ ಗ್ರೀಷ್ಮ
ಹರಿಯುವ ನೀರಿನಲ್ಲಿ ಬಿದ್ದ ಹೂವಿನಂತೆ..
ನನ್ನ ನೆನಪುಗಳನ್ನು ಎಳೆದೊಯ್ಯುತ್ತಿದ್ದಾನೆ
ನನ್ನ ಕಲ್ಪನೆಯ ಸ್ವರ್ಗದೊಡನೆ....
- ಪ್ರಸನ್ನ ರೇವಣ್ಣ
ರೇಶಿಮೆಯಂಥ ಚಿಗುರುಗಳು ಮೂಡಿವೆ ಅಲ್ಲಲ್ಲಿ
ಅನಂತವಾಗಿ ಚಾಚಿದ ಬಯಲು ಮುಗಿಯುತ್ತದೆ
ತೆಳುನೇರಳೆಯ ಪರ್ವತರಂಗಗಳಲಿ...
ಕಪ್ಪು ಗೂಡಿನ ದೀಪವನು ಕುಣಿಸುತ್ತಿದೆ
ಮೇಘಗಳಂಚಿನಿಂದ ಜಾರಿ ಬಿದ್ದ ತಂಗಾಳಿ
ದೂರ ಸರಿಯುತ್ತಿದ್ದಾನೆ ಗ್ರೀಷ್ಮ
ಹರಿಯುವ ನೀರಿನಲ್ಲಿ ಬಿದ್ದ ಹೂವಿನಂತೆ..
ನನ್ನ ನೆನಪುಗಳನ್ನು ಎಳೆದೊಯ್ಯುತ್ತಿದ್ದಾನೆ
ನನ್ನ ಕಲ್ಪನೆಯ ಸ್ವರ್ಗದೊಡನೆ....
- ಪ್ರಸನ್ನ ರೇವಣ್ಣ
Wednesday, December 13, 2006
ಮುಂದೆಂದೋ ಹುಟ್ಟುವ ಕವಿತೆಯೊಳಗೆ
ನನ್ನ ಮನದ ಹೊಳೆ ಹರಿಯುತ್ತಿದೆ
ಸಂಜೆಯ ಗುಲಾಬಿ ಆಕಾಶದೆಡೆಗೆ
ಚೈತ್ರನ ತುಂಡು ಮೇಘಗಳೆಡೆಗೆ
ನೂರಾರು ಎಕರೆಗಳ ಹಚ್ಚ ಹಸಿರಿನಲ್ಲಿ
ಚಿಕ್ಕ ತೊರೆಯಂತೆ ಹರಿಯುತ್ತಿದೆ
ನಮ್ಮ ಮನದ ಹೊಳೆ
ಮುಂದೆಂದೋ ಹುಟ್ಟುವ ಕವಿತೆಯೊಳಗೆ
ಅಡಗಿ ಕುಳಿತಿರುವ ಹುಡುಗಿಯಡೆಗೆ!
- ಪ್ರಸನ್ನ ರೇವಣ್ಣ
ಸಂಜೆಯ ಗುಲಾಬಿ ಆಕಾಶದೆಡೆಗೆ
ಚೈತ್ರನ ತುಂಡು ಮೇಘಗಳೆಡೆಗೆ
ನೂರಾರು ಎಕರೆಗಳ ಹಚ್ಚ ಹಸಿರಿನಲ್ಲಿ
ಚಿಕ್ಕ ತೊರೆಯಂತೆ ಹರಿಯುತ್ತಿದೆ
ನಮ್ಮ ಮನದ ಹೊಳೆ
ಮುಂದೆಂದೋ ಹುಟ್ಟುವ ಕವಿತೆಯೊಳಗೆ
ಅಡಗಿ ಕುಳಿತಿರುವ ಹುಡುಗಿಯಡೆಗೆ!
- ಪ್ರಸನ್ನ ರೇವಣ್ಣ
Sunday, December 10, 2006
ನನ್ನ ಹದಿಹರೆಯುತ್ತಿರುವಾಗ...
ನನ್ನ ಹದಿಹರೆಯುತ್ತಿರುವಾಗ ನನಗಿಷ್ಟವಾಗುತ್ತಿತ್ತು
ದಟ್ಟ ಕಾಡು, ಬೆಚ್ಚಗಿನ ಹುಲ್ಲು, ಕಾದ ನೆಲ...
ಸ್ವಚ್ಚಂದ, ಸ್ವತಂತ್ರ ಭಾವ!
ಯೌವ್ವನದ ಹೊಸ್ತಿಲಲಿ ಪದವಿಯ ಮರಳು
ಸಮಾಜದ ಯಂತ್ರಕ್ಕೆ ನನ್ನ ಕೊರಳು
ಅಂದೊದು ದಿನ ಎದ್ದು ಕುಳಿತಾಗ
ಬಂದು ನಿಂತಿತ್ತು ಇಪ್ಪತ್ತೆಂಟನೆಯ ಉಗಾದಿ!
ವ್ಯವಸ್ಥೆಯನ್ನು ಕಟ್ಟುತ್ತೇವೆ ನಾವು
ನಮ್ಮ ಕಾಲಿಗೆ ನಾವೇ ಕಟ್ಟಿಕೊಳ್ಳುವ ಕುಣಿಕೆಯಂತೆ
ಕನ್ನಡಿಯ ಗಂಟನ್ನು ಕಂಡು ಮರುಗುತ್ತೇವೆ
ಎಡವುತ್ತೇವೆ ಎದೆಯ ದನಿಯ ಹೊಸ್ತಿಲನ್ನು!
ಬೇಕು ಒಪ್ಪೊತ್ತಿನ ಊಟ, ಕಣ್ಣಿಗೆ ನಿದ್ರೆ
ಮನಸ್ಸಿಗೆ ಧ್ಯಾನ! ಆಗಾಗ ಬೀಳುವ ಕನಸು!
ಬೇಕು ಬುದ್ದಿಗೆ ಸವಾಲು, ವಿದ್ಯೆಗೆ ಗುರಿ
ದುಡಿಯುವ ಕೈಗಳಿಗೆ ನಿವೃತ್ತಿಯಿಲ್ಲದ ಕೆಲಸ!
ನನ್ನ ಹಳ್ಳಿ ಚಿಕ್ಕದು, ನನ್ನ ಪ್ರಪಂಚ ದೊಡ್ಡದು
ನನ್ನ ಮನೆಗಿವೆ ಕೆಲವೇ ಕೋಣೆ
ಮನೆಯ ಸುತ್ತಲಿವೆ ನನ್ನಜ್ಜನಂತ ಮರಗಳು
ನನ್ನಜ್ಜಿಯ ಮುಸುಕಿನಂತೆ ಬಂದು ನಿಲ್ಲುತ್ತದೆ
ಮುಂಜಾವಿನ ಮಂಜು
ಸಂಪಿಗೆ ಮರದ ಹಾದು ಬಂದಿದೆ
ತಂಗಾಳಿ, ಆಗಾಗ ಸುರಿಯುತ್ತದೆ
ಕಾಡು ಮಳೆ. ಬಿರಿದು ನಿಂತ
ಕಪ್ಪು ನೆಲದೊಳಗೊಂದು
ಚಿಗುರು ಮೊಡುತ್ತದೆ!
ಇನ್ನೂ ಕಾಣುವ ದೂರ ದಿಗಂತದಲ್ಲಿ
ಸೂರ್ಯ ಹುಟ್ಟುತ್ತಾನೆ!
- ಪ್ರಸನ್ನ ರೇವಣ್ಣ
ದಟ್ಟ ಕಾಡು, ಬೆಚ್ಚಗಿನ ಹುಲ್ಲು, ಕಾದ ನೆಲ...
ಸ್ವಚ್ಚಂದ, ಸ್ವತಂತ್ರ ಭಾವ!
ಯೌವ್ವನದ ಹೊಸ್ತಿಲಲಿ ಪದವಿಯ ಮರಳು
ಸಮಾಜದ ಯಂತ್ರಕ್ಕೆ ನನ್ನ ಕೊರಳು
ಅಂದೊದು ದಿನ ಎದ್ದು ಕುಳಿತಾಗ
ಬಂದು ನಿಂತಿತ್ತು ಇಪ್ಪತ್ತೆಂಟನೆಯ ಉಗಾದಿ!
ವ್ಯವಸ್ಥೆಯನ್ನು ಕಟ್ಟುತ್ತೇವೆ ನಾವು
ನಮ್ಮ ಕಾಲಿಗೆ ನಾವೇ ಕಟ್ಟಿಕೊಳ್ಳುವ ಕುಣಿಕೆಯಂತೆ
ಕನ್ನಡಿಯ ಗಂಟನ್ನು ಕಂಡು ಮರುಗುತ್ತೇವೆ
ಎಡವುತ್ತೇವೆ ಎದೆಯ ದನಿಯ ಹೊಸ್ತಿಲನ್ನು!
ಬೇಕು ಒಪ್ಪೊತ್ತಿನ ಊಟ, ಕಣ್ಣಿಗೆ ನಿದ್ರೆ
ಮನಸ್ಸಿಗೆ ಧ್ಯಾನ! ಆಗಾಗ ಬೀಳುವ ಕನಸು!
ಬೇಕು ಬುದ್ದಿಗೆ ಸವಾಲು, ವಿದ್ಯೆಗೆ ಗುರಿ
ದುಡಿಯುವ ಕೈಗಳಿಗೆ ನಿವೃತ್ತಿಯಿಲ್ಲದ ಕೆಲಸ!
ನನ್ನ ಹಳ್ಳಿ ಚಿಕ್ಕದು, ನನ್ನ ಪ್ರಪಂಚ ದೊಡ್ಡದು
ನನ್ನ ಮನೆಗಿವೆ ಕೆಲವೇ ಕೋಣೆ
ಮನೆಯ ಸುತ್ತಲಿವೆ ನನ್ನಜ್ಜನಂತ ಮರಗಳು
ನನ್ನಜ್ಜಿಯ ಮುಸುಕಿನಂತೆ ಬಂದು ನಿಲ್ಲುತ್ತದೆ
ಮುಂಜಾವಿನ ಮಂಜು
ಸಂಪಿಗೆ ಮರದ ಹಾದು ಬಂದಿದೆ
ತಂಗಾಳಿ, ಆಗಾಗ ಸುರಿಯುತ್ತದೆ
ಕಾಡು ಮಳೆ. ಬಿರಿದು ನಿಂತ
ಕಪ್ಪು ನೆಲದೊಳಗೊಂದು
ಚಿಗುರು ಮೊಡುತ್ತದೆ!
ಇನ್ನೂ ಕಾಣುವ ದೂರ ದಿಗಂತದಲ್ಲಿ
ಸೂರ್ಯ ಹುಟ್ಟುತ್ತಾನೆ!
- ಪ್ರಸನ್ನ ರೇವಣ್ಣ
Friday, November 17, 2006
ನನ್ನ ಮುಂದೆ ದರ್ಶನಗಳಿವೆ, ಮುಖಗಳಿಲ್ಲ...
ಮನೆ ಹೊರಗೆ ಸುರಿಯುತ್ತಿದೆ ಸೋನೆ ಮಳೆ,
ಹಿತ್ತಲಿನ ಬಾಳೆಯೆಲೆಗಳ ಡಮರುನಾದ
ಸಂಜೆಗತ್ತಲಿನಲ್ಲಿ ಕುಣಿದಾಡಿದ ದೀಪ
ಬರೆದಿದೆ ಬೆಳ್ಳಿ ಗೆರೆಗಳ ಹಾಡು
ನುಗ್ಗಿದ ಗಾಳಿಯೊಂದಿಗೆ ಕತ್ತಲಿನ ಹಾಳೆಯಲ್ಲಿ.
ನನ್ನ ಮುಂದೆ ದರ್ಶನಗಳಿವೆ, ಮುಖಗಳಿಲ್ಲ
ನನ್ನ ಹಿಂದೆ ದಾರ್ಶನಿಕ ಋಷಿಗಳಿಲ್ಲ
ಅನಂತವಾಗಿದೆ ಸುತ್ತಲಿನ ಪ್ರಕೃತಿ!
ಏಕಾಂಗಿ ಹೃದಯ ಬಿಕ್ಕುತ್ತಿದೆ
ಬೀಳುತ್ತಿರುವ ಕಣ್ಣೀರುಗಳೆಲ್ಲವೂ ಅಕ್ಷರಗಳು
ಬೆಟ್ಟದ ಮೇಲೆಲ್ಲೋ ಬೆಳೆದ ಕಾಡು ಹೂಗಳು!
- ಪ್ರಸನ್ನ ರೇವಣ್ಣ
ಹಿತ್ತಲಿನ ಬಾಳೆಯೆಲೆಗಳ ಡಮರುನಾದ
ಸಂಜೆಗತ್ತಲಿನಲ್ಲಿ ಕುಣಿದಾಡಿದ ದೀಪ
ಬರೆದಿದೆ ಬೆಳ್ಳಿ ಗೆರೆಗಳ ಹಾಡು
ನುಗ್ಗಿದ ಗಾಳಿಯೊಂದಿಗೆ ಕತ್ತಲಿನ ಹಾಳೆಯಲ್ಲಿ.
ನನ್ನ ಮುಂದೆ ದರ್ಶನಗಳಿವೆ, ಮುಖಗಳಿಲ್ಲ
ನನ್ನ ಹಿಂದೆ ದಾರ್ಶನಿಕ ಋಷಿಗಳಿಲ್ಲ
ಅನಂತವಾಗಿದೆ ಸುತ್ತಲಿನ ಪ್ರಕೃತಿ!
ಏಕಾಂಗಿ ಹೃದಯ ಬಿಕ್ಕುತ್ತಿದೆ
ಬೀಳುತ್ತಿರುವ ಕಣ್ಣೀರುಗಳೆಲ್ಲವೂ ಅಕ್ಷರಗಳು
ಬೆಟ್ಟದ ಮೇಲೆಲ್ಲೋ ಬೆಳೆದ ಕಾಡು ಹೂಗಳು!
- ಪ್ರಸನ್ನ ರೇವಣ್ಣ
Tuesday, November 14, 2006
ಹನಿಮಳೆಯಲ್ಲಿ ತೊಯ್ದ ಮಾವಿನ ಚಿಗುರು...
ಹನಿಮಳೆಯಲ್ಲಿ ತೊಯ್ದ ಮಾವಿನ ಚಿಗುರು
ಹೊಚ್ಚ ಹೊಸ ಟಾರು ರಸ್ತೆಯ ವೈಯ್ಯಾರ
ಕಡು ಬಿಸಿಲಿನಲಿ ಸಿಕ್ಕ ಬಣ್ಣದ ಬೀಸಣಿಕೆ
ಮೊದಲಬಾರಿ ಸೀರೆಯುಟ್ಟು ನಿಂತ ಚಿಕ್ಕ ತಂಗಿ
ಗಾಳಿಯಲ್ಲಿ ತೇಲಿ ಭುಜದ ಮೇಲೆ ಬಿದ್ದ ಹಣ್ಣೆಲೆ
ಅಂದೆಂದೋ ನಸುನಗೆ ಬೀರಿದ ಯಾರದೋ ಮಗು
ಸಂಜೆ ಐದಕ್ಕೆ ನುಸುಳುವ ಸ್ವರ್ಣ ರಶ್ಮಿ
ಚುಮುಚುಮೆನ್ನುವ ಬೆಳಗಿನ ನೀಲಿ ಬಣ್ಣ
ಮನಸ್ಸಿನೊಳಗೆ ಮೇಘ ಮಂದಾರವನ್ನೆಬ್ಬಿಸುತ್ತವೆ
ಮುದುಡಿದ ಕನಸುಗಳಿಗೆ ಇಂಧನವಾಗಿ
ಚೈತನ್ಯವನ್ನು ಬಡಿದೆಬ್ಬಿಸುತ್ತವೆ,
ಸರಳತೆಯೇ ಜೀವನವೆನ್ನಿಸುತ್ತವೆ!
- ಪ್ರಸನ್ನ ರೇವಣ್ಣ
ಹೊಚ್ಚ ಹೊಸ ಟಾರು ರಸ್ತೆಯ ವೈಯ್ಯಾರ
ಕಡು ಬಿಸಿಲಿನಲಿ ಸಿಕ್ಕ ಬಣ್ಣದ ಬೀಸಣಿಕೆ
ಮೊದಲಬಾರಿ ಸೀರೆಯುಟ್ಟು ನಿಂತ ಚಿಕ್ಕ ತಂಗಿ
ಗಾಳಿಯಲ್ಲಿ ತೇಲಿ ಭುಜದ ಮೇಲೆ ಬಿದ್ದ ಹಣ್ಣೆಲೆ
ಅಂದೆಂದೋ ನಸುನಗೆ ಬೀರಿದ ಯಾರದೋ ಮಗು
ಸಂಜೆ ಐದಕ್ಕೆ ನುಸುಳುವ ಸ್ವರ್ಣ ರಶ್ಮಿ
ಚುಮುಚುಮೆನ್ನುವ ಬೆಳಗಿನ ನೀಲಿ ಬಣ್ಣ
ಮನಸ್ಸಿನೊಳಗೆ ಮೇಘ ಮಂದಾರವನ್ನೆಬ್ಬಿಸುತ್ತವೆ
ಮುದುಡಿದ ಕನಸುಗಳಿಗೆ ಇಂಧನವಾಗಿ
ಚೈತನ್ಯವನ್ನು ಬಡಿದೆಬ್ಬಿಸುತ್ತವೆ,
ಸರಳತೆಯೇ ಜೀವನವೆನ್ನಿಸುತ್ತವೆ!
- ಪ್ರಸನ್ನ ರೇವಣ್ಣ
Thursday, October 26, 2006
ನನಗಿಷ್ಟ ಬೇಸಗೆಯ ನಿರುಮ್ಮಳ ರಾತ್ರಿಗಳು,
ನನಗಿಷ್ಟ ಬೇಸಗೆಯ ನಿರುಮ್ಮಳ ರಾತ್ರಿಗಳು,
ಮೌನದಲ್ಲಿ ತೋಯಿಸಿದ ಜಡಿಮಳೆ,
ಅಪರಿಚಿತ ಊರಿನಲ್ಲೊಂದು ನಡುರಾತ್ರಿ,
ಚಿಕ್ಕಂದಿನಲ್ಲಿ ಬಿಟ್ಟುಬಂದ ಊರಿನ ಮನೆಯಲ್ಲೊಂದು ವಾಸ,
ಕಡು ಹಸಿವೆಯಲ್ಲಿ ತಿಂದ ರೊಟ್ಟಿ, ಕುಡಿದ ನೀರು,
ನನ್ನ ನೀಲಿ ಕೋಟು ಅದರೊಳಗೊಮ್ಮೆ
ಅಡಗಿದ್ದ ಅವಳ ನರುಗಂಪು,
ನನಗಿಷ್ಟ ಮೌನದ ದೂರ ನಡಿಗೆ,
ನನ್ನ ಹಳೆಯ ಅಂಗಿ,
ಕಾಲಿಗೆ ಮುತ್ತಿಕ್ಕುವ ಮೀನುಗಳು,
ಕೆರೆಯ ಮೇಲೆ ಬೀಸುವ ಗಾಳಿ,
ತೇಲಾಡುವ ಮುಂಗುರುಳು,
ಮುಂಜಾವಿನವರೆ ಕೊಚ್ಚಿದ ಹರಟೆ, ಮತ್ತು
ನನಗಿಷ್ಟ ಆಗಾಗ ಕಾಡುವ ನೆನಪುಗಳು,
- ಪ್ರಸನ್ನ ರೇವಣ್ಣ
ಮೌನದಲ್ಲಿ ತೋಯಿಸಿದ ಜಡಿಮಳೆ,
ಅಪರಿಚಿತ ಊರಿನಲ್ಲೊಂದು ನಡುರಾತ್ರಿ,
ಚಿಕ್ಕಂದಿನಲ್ಲಿ ಬಿಟ್ಟುಬಂದ ಊರಿನ ಮನೆಯಲ್ಲೊಂದು ವಾಸ,
ಕಡು ಹಸಿವೆಯಲ್ಲಿ ತಿಂದ ರೊಟ್ಟಿ, ಕುಡಿದ ನೀರು,
ನನ್ನ ನೀಲಿ ಕೋಟು ಅದರೊಳಗೊಮ್ಮೆ
ಅಡಗಿದ್ದ ಅವಳ ನರುಗಂಪು,
ನನಗಿಷ್ಟ ಮೌನದ ದೂರ ನಡಿಗೆ,
ನನ್ನ ಹಳೆಯ ಅಂಗಿ,
ಕಾಲಿಗೆ ಮುತ್ತಿಕ್ಕುವ ಮೀನುಗಳು,
ಕೆರೆಯ ಮೇಲೆ ಬೀಸುವ ಗಾಳಿ,
ತೇಲಾಡುವ ಮುಂಗುರುಳು,
ಮುಂಜಾವಿನವರೆ ಕೊಚ್ಚಿದ ಹರಟೆ, ಮತ್ತು
ನನಗಿಷ್ಟ ಆಗಾಗ ಕಾಡುವ ನೆನಪುಗಳು,
- ಪ್ರಸನ್ನ ರೇವಣ್ಣ
Thursday, October 12, 2006
ಕರಿಮೋಡ ಚುಮುಕಿಸಿದ ತಣ್ಣನೆ ಹನಿಗಳಿಂದ
ಕರಿಮೋಡ ಚುಮುಕಿಸಿದ ತಣ್ಣನೆ ಹನಿಗಳಿಂದ
ತೊಯ್ದು ತೊಪ್ಪೆಯಾಗಿದೆ ಚೋರೆ ಹಕ್ಕಿಯ ಪುಕ್ಕ
ಕೊರೆಯುವ ರಾತ್ರಿ, ತಂಗಾಳಿಯ ಇರಿತ
ಆಗಾಗ ಬಂದು ಮರೆಯಾಗುವ ಚಂದ್ರನ ಸಂಗ
ಪಕ್ಕದ ಮಾವಿನ ಮರ ಚೆಲ್ಲುತ್ತಿದೆ ಹೂವು
ದೂರದಲ್ಲೆಲ್ಲೋ ಹರಿಯುವ ನೀರಿನ ಸದ್ದು
ಹಾರಾಡುವ ಕಪ್ಪಟೆ ಹಕ್ಕಿಗಳ ನೆರಳು
ಬಳ್ಳಿ ತಬ್ಬಿದ ಒಂಟಿ ಮರದ ಮೇಲೆ ಹಾಡಿದೆ
ನಮ್ಮ ಚೋರೆಹಕ್ಕಿ, ಮೌನಗಾನವದು
ಹೃದಯಕ್ಕೆ ಮಾತ್ರ ಕೇಳಿಸುವುದು!
- ಪ್ರಸನ್ನ ರೇವಣ್ಣ
ತೊಯ್ದು ತೊಪ್ಪೆಯಾಗಿದೆ ಚೋರೆ ಹಕ್ಕಿಯ ಪುಕ್ಕ
ಕೊರೆಯುವ ರಾತ್ರಿ, ತಂಗಾಳಿಯ ಇರಿತ
ಆಗಾಗ ಬಂದು ಮರೆಯಾಗುವ ಚಂದ್ರನ ಸಂಗ
ಪಕ್ಕದ ಮಾವಿನ ಮರ ಚೆಲ್ಲುತ್ತಿದೆ ಹೂವು
ದೂರದಲ್ಲೆಲ್ಲೋ ಹರಿಯುವ ನೀರಿನ ಸದ್ದು
ಹಾರಾಡುವ ಕಪ್ಪಟೆ ಹಕ್ಕಿಗಳ ನೆರಳು
ಬಳ್ಳಿ ತಬ್ಬಿದ ಒಂಟಿ ಮರದ ಮೇಲೆ ಹಾಡಿದೆ
ನಮ್ಮ ಚೋರೆಹಕ್ಕಿ, ಮೌನಗಾನವದು
ಹೃದಯಕ್ಕೆ ಮಾತ್ರ ಕೇಳಿಸುವುದು!
- ಪ್ರಸನ್ನ ರೇವಣ್ಣ
Subscribe to:
Posts (Atom)