ಭದ್ರೆಯಾಗಿ ಕೆಂದನ್ನೂ, ತುಂಗೆಯಾಗಿ ಹಸಿರೆಲೆಗಳನ್ನೂ ತಂದ
ತುಂಗಭದ್ರೆ ಸಂಗಮದಲ್ಲಿ ವರುಣೋನ್ಮತ್ತೆಯಾಗಿ
ಹರಿಹರದಲ್ಲಿ ದೇವನ ಪಾದಗಳನ್ನು ತೊಳೆಯುವಂತೆ,
ಅವಳ ಜಲಗರ್ಭದ ಮೇಲೆ ತೇಲುತ್ತಿದೆ ಹಾಯಿದೋಣಿ,
ಮಳೆಗಾಲದಲ್ಲೂ ಮೀನುಗಳನ್ನು ಅರಸುತ್ತಿದೆ ಮಿಂಚುಳ್ಳಿ,
ತಮ್ಮ ಕಾಯಕಗಳನ್ನು ಪ್ರೀತಿಸುತ್ತಾ ಚಳಿಗಾಲಕ್ಕೆ
ತಮ್ಮ ಮನೆಗಳನ್ನು ಸೇರುವಂತೆ!
- ಪ್ರಸನ್ನ ರೇವನ್
No comments:
Post a Comment