Tuesday, July 04, 2006

ತುಂಗಭದ್ರೆಯಲ್ಲಿ ಭರತಿ ಬಿದ್ದಾಗ

ಭದ್ರೆಯಾಗಿ ಕೆಂದನ್ನೂ, ತುಂಗೆಯಾಗಿ ಹಸಿರೆಲೆಗಳನ್ನೂ ತಂದ
ತುಂಗಭದ್ರೆ ಸಂಗಮದಲ್ಲಿ ವರುಣೋನ್ಮತ್ತೆಯಾಗಿ
ಹರಿಹರದಲ್ಲಿ ದೇವನ ಪಾದಗಳನ್ನು ತೊಳೆಯುವಂತೆ,
ಅವಳ ಜಲಗರ್ಭದ ಮೇಲೆ ತೇಲುತ್ತಿದೆ ಹಾಯಿದೋಣಿ,
ಮಳೆಗಾಲದಲ್ಲೂ ಮೀನುಗಳನ್ನು ಅರಸುತ್ತಿದೆ ಮಿಂಚುಳ್ಳಿ,
ತಮ್ಮ ಕಾಯಕಗಳನ್ನು ಪ್ರೀತಿಸುತ್ತಾ ಚಳಿಗಾಲಕ್ಕೆ
ತಮ್ಮ ಮನೆಗಳನ್ನು ಸೇರುವಂತೆ!

- ಪ್ರಸನ್ನ ರೇವನ್

No comments: