ನನ್ನ ಬದುಕೊಂದು ಬರಡು
ಒಣ ಹುಣಸೆಯ ಕೊರಡು
ಹಸಿರಾದ ಹಾವಿನಂತೆ ಅದು
ಅದರ ಹಸಿರು ತೋರಿಕೆಯದು
ವಿಷವಿಲ್ಲವಿದಕೆ
ಸಖಿ ಹತ್ತಿರವಿಲ್ಲ ಅದು ಬದುಕೆ?
ಸತ್ವ ಸುವಿಚಾರಗಳು ತಣಿಸುತ್ತವೆ
ನಿಶ್ಚಲವಾದ ಮನಸಿಗೆ ಸಿಹಿ ಉಣಿಸುತ್ತವೆ
ದೇಹದ ಮನಸ್ಸಿಗೆ ಸುಡುವುದೊಂದು ಗೊತ್ತು
ಮನಸ್ಸಿನ ಮನಸು ನೋಡುವುದು ಸತ್ತು
ಕವಿತೆ ಹುಟ್ಟುತ್ತವೆ ಸಮಾಧಾನಕ್ಕಾಗಿ
ನೆನಪುಗಳ ಗೋರಿಯ ಕಟ್ಟುವುದಕ್ಕಾಗಿ
ನೆನಪುಗಳು ಸಾಯುವುದಿಲ್ಲ ಅಲ್ಲವೇ?
ಗೋರಿಯೂ ನೆನಪಿಗಾಗಿ ಅಲ್ಲವೆ?
- ಪ್ರಸನ್ನ ರೇವಣ್ಣ
No comments:
Post a Comment