ಅವಳ ಭರವಸೆಯ ಭಾಷೆಗೆ
ಅರ್ಥವಿಲ್ಲದಂತೆ ಮರೆಯಾದಳು
ಹಗಲೇ ಅರ್ಧ ಜಾರಿದ ಚಂದ್ರನಂತೆ
ವಿರಹದ ಹಾಳೆಯ ಮೇಲೆ ತಡಬಡಿಸಿ
ನೋವಿನ ಕವಿತೆಗಳ ಮೊಡಿಸಲು ಹೊರಟಾಗ
ರಾತ್ರಿ ಪಾಳಿಯ ಕಾವಲುಗಾರನೆಂದ 'ಎಚ್ಚರ'
ಕಿಟಕಿಯಿಂದ ನೋಡಿದರೆ ಕಪ್ಪು
ಸರೋವರದ ಸುತ್ತ ದೀಪದ ಸಾಲು
ಸಂಪಿಗೆಯ ಮರದ ಸವಿಗಾಳಿ ತಂದಿದೆ
ಹುಡುಕಿದರೂ ಸಿಗದ ಕವಿತೆಗಳ ನೆರಳು
ಬರೆಯಲಾಗದೆ ಕುಳಿತ ಕವಿಗೊಂದು
ನಿಮ್ನ ನೆರಳು, ನೆನಪಿನಲ್ಲಿ ಸುಳಿದಾಡುವ ಹೆರಳು!
- ಪ್ರಸನ್ನ ರೇವಣ್ಣ
No comments:
Post a Comment