ನಿನ್ನೆ ರಾತ್ರಿ ಸುರಿದ ಮಳೆಯ ತೇವದಿಂದ
ಬೆಣ್ಣೆಯಂತಾಗಿದೆ ನಿನ್ನ ಮನೆಯ ರಸ್ತೆ
ತೊಳೆದಿದೆ ಬಿದಿರೆಲೆಗಳ ಸಾಲು
ಸುರಿದಂತಾಗಿದೆ ಬಿಳಿ ಗುಲಾಬಿಗಳ ಮೇಲೆ ಹಾಲು
ಮನೆಯ ಗೇಟಿನಂಚಿನಲಿ ದಾಸವಾಳಗಳ
ನಡುವೆ ಅರಳಿದೆ ಕಮಲ ಮೊಗ
ಕುತೂಹಲದ ಕುಡಿನೋಟ,
ಇಣುಕು ನೋಟ, ಕಣ್ಣಾಟಗಳ ಬೀರಿ
ಕೊಲ್ಲುತಿದೆ, ಕಾಡುತಿದೆ, ಅಣಕುತಿದೆ
ಒಮ್ಮೆ ಕಂಡು ಮತ್ತೊಮ್ಮೆ ಮಾಯವಾಗಿ
ಜವನದಲಿ ಜವಬಾಧೆಯ ತೋರುತಿದೆ!
- ಪ್ರಸನ್ನ ರೇವಣ್ಣ
No comments:
Post a Comment